ಕಾರ್ಮಿಕರು,ಜಾನುವಾರುಗಳನ್ನು ಬಲಿ ತೆಗೆದುಕೊಂಡ ವ್ಯಾಘ್ರ ಸೆರೆ

ಕೊಡಗು:ಕಳೆದ ಕೆಲವು ದಿನಗಳಿಂದ ಕಣ್ಣಿಗೆ ಗೋಚರಿಸಿದರೂ ಜಾನುವಾರುಗಳು ಮತ್ತು ನಿರಂತರವಾಗಿ ಇಬ್ಬರು ಕಾರ್ಮಿಕರನ್ನು ಬಲಿ ಪಡೆದುಕೊಂಡಿದ್ದ ಎನ್ನಲಾದ ಹುಲಿಯೊಂದನ್ನು ಅಭಿಮನ್ಯು ನೇತೃತ್ವದ ಗಜಪಡೆ ಕಾರ್ಯಾಚರಣೆ ಮೂಲಕ ದಾಳಿ ನಡೆದ ವಿರಾಜಪೇಟೆ ತಾಲ್ಲೂಕಿನ ಶ್ರೀಮಂಗಲ ಸಮೀಪದ ಮಂಚಳ್ಳಿಯಲ್ಲಿ ಅರಣ್ಯ ಇಲಾಖೆಯ ವಿಶೇಷ ಕಾರ್ಯಪಡೆ ತಂಡ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದೆ.ಶನಿವಾರ ಸಂಜೆ ಸೌದೆ ತರಲು ತೆರಳಿದ್ದ ಅಯ್ಯಪ್ಪ ಮತ್ತು ಅಣಬೆ ಹುಡುಕಲು ಹೋದ ಪಣಿ ಎಂಬ ಮಹಿಳೆ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾದ ಹಿನ್ನಲೆಯಲಿ ನಡೆದ ಕಾರ್ಯಾಚರಣೆಯಲ್ಲಿ ಹುಲಿಯನ್ನು ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದೆ.

error: Content is protected !!