fbpx

ಅರೆಬಾಸೆಯ ಬರವೆಸನ ಬೊಳ್ಪುಗ..

✍🏻ವಿನೋದ್ ಮೂಡಗದ್ದೆ,

ಅಂದ್ ಮಾಮೂಲ್’ನಂಗೆ ಮೊಬೈಲ್ ಲಿ ಮೆಸೇಜ್ ಗಳ ನೋಡಿಕಂಡ್ ಇರ್ಕನ ಆಂಗಿಕ ಮಲ್ಟಿಮೀಡಿಯ ಕಡೆಂದ ಆಟಿ ೧೮ ಕ್ಕೆ ವಿಶ್ವ ಅರೆಭಾಷೆ ದಿನದ ಆಚರಣೆ ತ ಕಂಡತ್‌.

ವಾವ್!! ಅಂತು ನಮ್ಮ ಭಾಷೆಲಿ ಒಂದ್ ವಿಶ್ವ ಮಟ್ಟದ ಜಂಬರ ಆಗ್ತಾ ಉಟ್ಟು ತ ಕುಸಿ ಆತ್‌. ನೋಡ್ರೆ ಮಾಡ್ತಾ ಇರ್ದು ಗೆಳೆಯ ಲೋಕೇಶ್ ಊರುಬೈಲ್. ಹಂಗೆ ಒಮ್ಮೆ ಅವಂಗೆ ಫೋನ್ ಮಾಡಿ ಮಾತಾಡ್ದೆ‌. ಈಗ ಲಾಕ್’ಡೌನ್ ಲಿ ಎನಾರ್ ಒಂದು ಭಾಷೆನ ಜಂಬರ ಆಕಲ‌. ಅದೂ ಅಲ್ಲದೆ ಆಟಿ ಕೊಡಗ್ ಮತ್ತೆ ದಕ್ಷಿಣ ಕನ್ನಡಲಿ ಒಟ್ಟಿಗೆ ಆಚರಣೆ ಮಾಡುವೆ ಹಂಗೆ ಆಟಿನೇ ತಕಂಡೆ ತ ಹೇಳ್ತ್‌.

ಮತ್ತೆ ಎರಡ್ ದಿನಲಿ ಇನ್ನ್ ಒಂದಷ್ಟ್ ಸಂಘಗ ಇವರೊಟ್ಟಿಗೆ ಸೇರಿಕಂಡ್ ಅರೆಬಾಸೆಲಿ ಕೆಲವ್ ಪೈಪೋಟಿಗಳ ಇಸಿದೊ. ನಾನ್ ಸ ಯಾಕೆ ನಮ್ಮ ಅರೆಬಾಸೆ ಮುಡ್ಪು ಪತ್ರಿಕೆ ಕಡೆಂದ ಒಂದ್ ಪೈಪೋಟಿ ಇಸಿಕಾದ್ ತ ನೆನ್ಸಿ ಪಿಳ್ಳಿಕಳ ಬಾಯಿಲಿ ಅಜ್ಜಿ ಕತೆ ತೇಳೊ ಪೈಪೋಟಿ ಏರ್ಪಾಡ್ ಮಾಡಿ ಆತ್. ೧೨ ವರ್ಷದೊಳಗಿನ ಮಕ್ಕಳ್’ಗೆ ಅಜ್ಜಿ ಕಥೆ ಹೇಳುವ ಸ್ಪರ್ಧೆ.

ಅದೊಂದ್ ಕಾಲ ಇತ್ತ್. ನಾವು ಅರೆಭಾಷೆ ಮಾತಾಡವು, ಅರೆಭಾಷೆ ಜನಾಂಗದವ್ ತ ಹೇಳಿಕಣಿಕೆ ಜನ ಮುಜುಗರ ಪಟ್ಟ್ ಕಣ್ತಾ ಇದ್ದೊ‌, ಕೀಳರಿಮೆ ಇತ್ತ್. ಹಂಗಾಗಿ ನಾವು ಹಿಂದೆನೇ ಉಳ್ಕಂಡೊ.

ಕಡೆಗೆ ಕೆಲವ್ ವರ್ಷಗಳ್ಂದ ಇತ್ತ ಹಲವಾರ್ ಆಸಕ್ತರ್ ಭಾಷೆನ ಉಳ್ಸೊಕು, ಮುಂದೆನ ಪೀಳಿಗೆಗೆ ಉಳ್ಸೊಕು ತೇಳೋ ನಿಟ್ಟ್’ಲಿ ಬಾಳ ಪ್ರಯತ್ನ ಪಟ್ಟೊ‌. ಅದರ ಫಲನೇ ಇಂದ್ ಅರೆಭಾಷೆ ವಿಶ್ವ ಮಟ್ಟಲಿ ಗುರುತಿಸಿಕಣ್ವಂಗೆ ಆವ್ಟು.

ಪೋಸ್ಟರ್ ಮಾಡಿ ಫೇಸ್ ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್ ತ ಎಲ್ಲ ಕಡೆ ಹಾಕಿ ಆತ್. ಒಂದು ದಿನ, ಎರಡ್ ದಿನ ಉಹುಂ ಒಂದು ವಾರ ಆದರೂ ಒಂದೂ ಕತೆಗ ಬಾತ್ಲೆ. ಎಂತ ಮಾಡ್ದು ತ ಆತ್ ಮತ್ತೆ ಇನ್ನೊಮ್ಮೆ ೧೨ ವರ್ಷದ ಮಕ್ಕ ಇರವ್ಕೆ ಕರೆ ಮಾಡಿ ಕಥೆ ಹೇಳ್ಸಿಕೆ ಕೇಳಿಕಂಡ್ ಆತ್. ಮತ್ತೆ ಒಂದ್ ವಾರಲಿ ಎರಡ್ ಕಥೆಗ ಬಾತ್. ಇನ್ನ್ ಕೆಲವರ ಮಾತ್ ತೇಳ್ರೆ ಮಕ್ಕಳ್’ಗೆ ಕಥೆ ಹೇಳಿಕೆ ಕುಸಿ ಉಟ್ಟು ಆದ್ರೆ ಅರೆಬಾಸೆಲಿ ಹಂಞ ಬಂಙ ಆದು ತ.

ಅತ್ತ ವಾಲಗ ಕುಣ್ತ, ಕಾರ್ಡ್ ಲಿ ಕಥೆ, ಗಾದೆನ ಜೊಂಪೆ, ಮೊಬೈಲ್ ಫೊಟೊಗ್ರಫಿ ಹಿಂಗೆ ಇನ್ನಷ್ಟ್ ಪೈಪೋಟಿಗ ಇದ್ದ್. ಅವೆಲ್ಲವ್ಕೂ ಸಾಕಷ್ಟ್ ಸ್ಪರ್ಧಿಗ ಆಯಾ ಸ್ಪರ್ಧೆಗೆ ಬಂದಾಗಿತ್ತ್.
ಏನಿಲ್ಲೆರೂ ಹತ್ತಾರ್ ಕಥೆಗ ಬಂದರೆ ಸಾಕ್ ತ ನೆನ್ಸಿ ಮತ್ತೆ ಇನ್ನೊಂದು ಸಲ ಕರೆ ಮಾಡಿ ಆತ್. ಅಲ್ಲೊಂದು ಇಲ್ಲೊಂದು ತ ಬಾಕೆ ಸುರು ಆತ್. ಜುಲೈ ೩೧ ಆಕಿರಿ ದಿನ. ೩೦ ಕ್ಕೆ ಲೆಕ್ಕ ಹಾಕಿರೆ ೭ ಕಥೆಗ ಆಗಿತ್ತ್‌. ಹಂಞ ನೆಮ್ಮದಿ ಆತ್, ಆದರೂ ನೆನ್ಸಿದಷ್ಟ್ ಬಾತ್ಲೆ ಅಲ ತ ತಲೆಲೀ ಹಂಗೇ ಇತ್ತ್. ೩೧ ರ ಬೊಳ್ಪುಂದ ಒಂದೊಂದೇ ಕಥೆಗ ಬಾಕೆ ಸುರು ಆತ್.

೪-೫ ವರ್ಷದ ಮಕ್ಕಳ್ಂದ ೧೨ ವರ್ಷದ ವರೆಗೆನ ಮಕ್ಕ ಬಾಳ ಲಾಯ್ಕಲಿ ಕಥೆಗಳ ಹೇಳಿಯೊಳೊ.

ಮನಿತ್ ಪೂಣಚ್ಚ ಚೆಟ್ಟಿಮಾಡ, ಪ್ರಿಶಾನಿ ಎ.ಸಿ, ಸೋನಾ ನಾರ್ಕೋಡು, ಲಕ್ಷನ್ ಕಾಳೇರಮ್ಮನ, ರಮಿತಾ ಪುರ, ಗ್ರಂಥ ಅರ್ನೋಜಿ, ಪಾಣತ್ತಲೆ ಲಿಪಿಕಾ, ಮೂಡಗದ್ದೆ ಪುಲಿನ್ ಪೂವಯ್ಯ, ಪೆರುಬಾಯಿ ಉನ್ನತ್ ಸಾರಥ್ಯ, ಕಡ್ಲೇರ ಎಂ. ರುಷಿಕ, ಯಶ್ ಕಾರ್ಯಪ್ಪ, ನಕ್ಷತ್ರ ಮಜಿಕೋಡಿ, ದಿವಿನ್ ಡೇನಿಲ್ ತೇಲಬೈಲ್, ಬಳ್ಳಡ್ಕ ಬಾಂಧವ್ಯ ದಿನೇಶ್, ಮೌರ್ಯ ನಾರ್ಕೋಡು, ಬಂಗಾರಕೋಡಿ ರಿತಿಕಾ, ಋತ್ವಿ ಎ.ಎಂ ಸೇರಿ ಒಟ್ಟ್ ೧೭ ಮಕ್ಕ ಕಥೆಗಳ ಹೇಳಿ ವಿಡಿಯೋ ಕಳ್ಸಿದೊ. ಈಗ ಅನ್ಸಿತ್ ಏನ್ ಹೇಳ್ರೆ ಬೆಳೆವ ಮಕ್ಕಳ್ಲಿ ನಾವ್ ಭಾಷಾಭಿಮಾನ ಮೂಡ್ಸಿರೆ ಅದ್ ಕಡೆ ಮುಟ್ಟ ಅವರ್ಂದ ಬುಟ್ಟು ಹೋಕಿಲೆ. ಭಾಷೆಗೆ ಸ ಇದ್ ದೊಡ್ಡ ಸೊತ್ತ್ ಆದೆ.

ಒಬ್ಬೊಬ್ಬರ ಕಥೆಗಳ ಕೇಳ್ಕನ ಕುಸಿ ಆದೆ. ಅರೆಭಾಷೆಗೆ ಒಳ್ಳ ಭವಿಷ್ಯ ಉಟ್ಟು ತ ಅನ್ಸಿದೆ‌. ಬೆಳೆವ ಸಿರಿ ಮೊಳಕೆಲಿ ತ ಹೇಳುವಂಗೆ ಸಣ್ಣ ಮಕ್ಕಳಿಗೆ ನಾವ್ ನಮ್ಮ ಭಾಷೆ, ಆಚಾರ-ವಿಚಾರ, ಸಂಸ್ಕೃತಿ, ಪದ್ಧತಿಗಳ ತಿಳ್ಸಿಕೊಡೊಕು. ಆಗ ಮಾತ್ರ ನಾವು ನಮ್ಮ ಅವ್ವ ಬಾಸೆನ ನಮ್ಮ ಋಣ ತೀರ್ಸಿದಂಗೆ ಆದೆ.

ಹಿಂಗೆ ಇನ್ನಷ್ಟ್ ಜಂಬರಗ, ಭಾಷೆನ ಬೆಳ್ಸುವ ಪೈಪೋಟಿಗ ಬಂದರೆ ಮುಂದಕೆ ಸ ಎಲ್ಲರ ಬಾಯಿಲೂ ಅರೆಬಾಸೆ ಅಳಿಯದೇ ಉಳ್ಕಂಡದೆ.

ಅರೆಭಾಷೆ ಬಳ್ಸ್’ನೋ, ಬೆಳ್ಸ್’ನೋ, ಒಳ್ಸ್’ನೋ…

✍🏻ವಿನೋದ್ ಮೂಡಗದ್ದೆ

error: Content is protected !!