ಬನ್ನಿ ಹಬ್ಬ ಮಾಡೊಮೊ…

✍ವಿನೋದ್ ಮೂಡಗದ್ದೆ,

ಕೊಡಗ್ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಗಳ್ಲಿ ಪ್ರಚಲಿತಲಿ ಇರುವ ಭಾಷೆ ಅರೆಭಾಷೆ‌. ಇದ್ ಸುಮಾರ್ ೭ ಲಕ್ಷಕ್ಕೂ ಹೆಚ್ಚ್ ಜನರ ಅವ್ವ ಭಾಷೆ ಅಗಿಯುಟು. ಹಂಗೆನೆ ಜನಾಂಗಗಳ ಮೀರಿ ಇದ್ ಬೆಳ್ದುಟು. ಒಟ್ಟ್ ಸೇರ್ಸಿ ನೋಡಿಕೆ ಹೋದರೆ ಸುಮಾರ್ ಹತ್ತ್ ಲಕ್ಷಕ್ಕೂ ಹೆಚ್ಚ್ ಜನ ಈ ಭಾಷೆನ ಮಾತಾಡ್ ಒಳೊ‌.

ಭಾಷಿಗರ ಆಚಾರ ವಿಚಾರಗ ಸ ವಿಭಿನ್ನ. ಕೊಡಗ್ ಮತ್ತೆ ದಕ್ಷಿಣ ಕನ್ನಡದ ಅರೆಭಾಷಿಗರ್ ಒಟ್ಟಾಗಿ ಒಂದೇ ದಿನ ಆಚರಿಸುವ ಹಬ್ಬ ಹೇಳ್ರೆ ಆಟಿ.

ಆದರೆ ಈ ಸಲದ ಕೊರೊನಾ ಮಹಾಮಾರಿಂದ ಎಲ್ಲಿ‌ ಸ ಯಾವ ಹಬ್ಬಗ ಸ ನಡ್ಸದಂಗೆ ಆವ್ಟು. ಹಂಗೆತೇಳಿ ಸುಮ್ಮನೆ ಕುದ್ದರೆ ಆಕಿಲೆತ ನೆನ್ಸಿದ ಒಂದಷ್ಟ್ ಉತ್ಸಾಹಿಗಳ ತಂಡ ಕಾಲಕ್ಕೆ ತಕ್ಕಂಗೆ ಕೋಲ ತೇಳುವಂಗೆ ಅಂತರ್ಜಾಲಲೇ ಆಟಿ ಹಬ್ಬನ ಆಚರ್ಸಿಕೆ ಮುಂದೆ ಬಂದೊಳೊ. ಇಂದ್ ಎಲ್ಲರ ಕೈಲಿ ಮೊಬೈಲ್ ತಪ್ಪಿದ್ದಲ್ಲ. ಒಂದಷ್ಟ್ ವಿಷಯ ಮಂಡನೆಗ, ಭಾಷೆ, ಬೊದ್ಕ್ ಸಂಸ್ಕೃತಿ, ಸಾಹಿತ್ಯ ಹಿಂಗೆ ಇನ್ನಷ್ಟ್ ವಿಚಾರಗಳ‌ ಇಸಿಕಂಡ್ ಆಟಿ ಹದಿನೆಂಟ್ ತೇಳ್ರೆ ಆಗಸ್ಟ್ 3 ರಂದ್ ಬೊಳ್ಪುಂದಲೇ ಹಬ್ಬನ ಆಚರ್ಸಿಕೆ ಹೊರ್ಟೊಳೊ‌.

ನಮ್ಮಲ್ಲೇ ಈ ಭಾಷೆ ಅಳಿಯಕಾದ್ ಇದ್ ಮುಂದೆನ ಪೀಳಿಗೆಗೂ ಹೋಕು ತೇಳುವ ನಿಟ್ಟ್’ಲಿ ವಿಶ್ವ ಅರೆಭಾಷೆ ಹಬ್ಬನ ಆಚರಿಸಿಕೆ ತಯಾರಾಗೊಳೊ‌.

ಆಟಿ ತಿಂಗ ಯಾಕೆ ಇಷ್ಟ್ ಮಹತ್ವನ ಪಡ್ಕಂಡುಟ್ಟು ತೇಳ್ರೆ ಪಂಡ್ ಲಿ ಆಟಿ ತಿಂಗ ಬಾಕನ ನಾಟಿ ಕೆಲ್ಸ ಆಗಿರ್ತಾ ಇತ್ತ್‌. ಮಳೆ ಸ ಹೆಚ್ಚಾಗೊ ಬರ್ತಾ ಇದ್ದ ಸಮೆ. ಗದ್ದೆಗಳ್ಲಿ ನಾಟಿ ಮಾಡಿ ಮೈ ಕೋಟ ಹಿಡ್ದ್ ಬೇರೆ ಬೇರೆ ರೋಗಗ ಬರ್ತಾ ಇತ್ತ್. ಈಗನಂಗೆ ಕ್ಲಿನಿಕ್ ಆಸ್ಪತ್ರೆ ಕಾಣದ ಪೂರ್ವಜರ್ ಪ್ರಕೃತಿಲೇ ಸಿಕ್ಕುವ ಮೊದ್ದ್’ನ ಹುಡ್ಕಿಕಂಡಿದ್ದೊ. ಆಟಿ ಸೊಪ್ಪು, ಕೆಸ ಸೊಪ್ಪು, ಕಣಿಲೆ, ಆಟಿ ಎಸಂಡ್, ಹಾಲೆ ಮರದ ಕಷಾಯ, ಅಣ್ಶಣದ ಎಲೆ ಹಿಟ್ಟ್ ಹಿಂಗೆ ಇನ್ನಷ್ಟ್. ಪ್ರಕೃತಿ ದತ್ತ ಈ ಔಷಧಿಗ ಅಷ್ಟೇ ಪರಿಣಾಮನ ಬೀರ್ತಾ ಇತ್ತ್. ಈಗಲೂ ಸ ನಾವ್ ಆಟಿ ತಿಂಗಳ್ಲಿ ಇದೆಲ್ಲದರ ಬಳಕೆ ಮಾಡುವೆ. ಆಟಿ ಸೊಪ್ಪ್’ಲಿ ೧೮ ತರದ ಮೊದ್ದ್’ಗ ಇದ್ದದೆ ತ ಹೇಳುವೆ.

ಅರೆಭಾಷೆ ಬೆರೀ ಭಾಷೆ ಅಲ್ಲ ಬೊದ್ಕ್’ನ ಬೇರ್ ತೇಳುವ ಸಾಲ್’ಗ ಎಲ್ಲರ ಸೆಳ್ದುಟು. ಆಂಗಿಕ‌ ಮಲ್ಟಿಮೀಡಿಯ, ಸೂರಡಿ ತಂಡ, ಸುಳ್ಯ ಜೇಸಿ, ಅರೆಭಾಷೆ ಸಾಹಿತ್ಯ ಪರಿಷತ್ತು ವಾಟ್ಸಾಪ್ ಗುಂಪು, ನಾಟ್ಯ ಮಿಲನ ಟ್ರಸ್ಟ್, ಅಮರ ಸುಳ್ಯ ಸಂಘಟನಾ ಸಮಿತಿ, ರೂಪೇಶ್ ಫೋಟೋಗ್ರಫಿ, ಅರೆಭಾಷೆ ಮುಡ್ಪು ಪತ್ರಿಕೆ ಮತ್ತೊಂದಿಷ್ಟ್ ಒಂದೇ ಮನ್ಸ್’ನ ಜನ ಸೇರಿಕಂಡ್ ನಮ್ಮ ಭಾಷೆ, ನಮ್ಮ ಆಚಾರ ವಿಚಾರ ನಮ್ಮವ್ಕೆ ಅಲ್ಲದೇ ಇಡೀ ಪ್ರಪಂಚಕ್ಕೆ ಗೊತ್ತಾಕುತ ಸುರು ಮಾಡ್ದ ಈ ಜಂಬರಕೆ ಬಾಳ ಲಾಯ್ಕನ ಪ್ರತಿಕ್ರಿಯೆ ಸಿಕ್ಕುಟು.

ನಾಳೆ ಜಂಬರದ ಸುರುಗೆ ಬೊಳ್ಪುಗೆಂದಲೇ ವಿಷಯ ಮಂಡನೆ ಸುರು ಆದೆ 9 ಗಂಟೆಗೆ ಡಾ|| ಸುಂದರ ಕೇನಾಜೆ ಅವು “ಜನಪದ ಬೊದ್ಕ್’ಲಿ ಆಟಿನ ಗುಟ್ಟ್”, 9:30ಕ್ಕೆ ಡಾ|| ಪ್ರಭಾಕರ ಶಿಶಿಲ ಅವು ” ನಾನ್ ಮತ್ತೆ ಅರೆಭಾಷೆ”, 9:50 ಕ್ಕೆ ಕುಡೇಕಲ್ಲು ವಿದ್ಯಾಧರ್ ಅವು “ಅಮರ ಸುಳ್ಯದ ಸ್ವಾತಂತ್ರ್ಯ ಸಮರ”, 10:15 ಕ್ಕೆ ದೊಡ್ಡಣ್ಣ ಬರೆಮೇಲು ಅವು “ಕೃಷಿ ಜೀವನದೊಟ್ಟಿಗೆ ಅರೆಭಾಷೆ ಸಂಸ್ಕೃತಿ”, 10:40ಕ್ಕೆ ದಿನೇಶ್ ಮಡಪ್ಪಾಡಿ ಅವು ” ಸಮಾಜಲೆ ಸಂಘಟನೆನ ಬಲ ಮತ್ತೆ ಮಹತ್ವ”, 11:00 ಗಂಟೆಗೆ ಜಬ್ಬಾರ್ ಸಮೋ ಸಂಪಾಜೆ ಅವು ಅರೆಭಾಷೆಲಿ ಯಕ್ಷಗಾನದ ದಿನಂಗ”, 11:20 ಕ್ಕೆ ಪಟ್ಟಡ ಶಿವಕುಮಾರ್ ಅವು “ಕೊಡಗ್ ನಾಡ್’ಲಿ ಆಟಿ ತಿಂಗಳ ಗೌಜಿ”, 11:40 ಕ್ಕೆ ಬಾರಿಯಂಡ ಜೋಯಪ್ಪ ಅವು ” ಬೊದ್ಕ್ ಮತ್ತೆ ಕಥೆ”, 12:00 ಕ್ಕೆ ಲೈನ್ಕಜೆ ರಾಮಚಂದ್ರ ಅವು “ಮೊನ್ಸ ಸಂಬಂಧಗ ಮತ್ತೆ ಭಾಷೆ”, 12:15 ಕ್ಕೆ ಡಾ|| ಎನ್. ಎ ಜ್ಞಾನೇಶ್ ಅವು “ಗದ್ದೆ ಬೇಸಾಯದ ಹಸಿರ್ ನೆಂಪು”, 12:30 ಕ್ಕೆ ತೇಜಕುಮಾರ್ ಬಡ್ಡಡ್ಕ ಅವು “ಬೇಟೆನೊಳಗೆ ಅರೆಭಾಷೆ ಸಂಸ್ಕೃತಿ”, 12:45 ಕ್ಕೆ ಭವಶ್ರೀ ಮಂಡೆಕೋಲು ಅವು “ಅರೆಭಾಷೆಲಿ ಯಕ್ಷಗಾನದ ಪ್ರಸಂಗ ಸಾಧ್ಯತೆಗ ಮತ್ತೆ ಸವಾಲ್’ಗ”, 2:00 ಕ್ಕೆ ಜೀವನ್ ರಾಂ ಸುಳ್ಯ ಅವು “ಬೊದ್ಕ್ ಮತ್ತೆ ರಂಗಭೂಮಿ”, 2:20ಕ್ಕೆ ಲೋಕನಾಥ ಅಮಚೂರು “ಕಾರ್ತಿಂಗಳ ಗೌಜಿ”, 2:40 ಕ್ಕೆ ಗೀತಾ ಮೋಂಟಡ್ಕ ಅವು “ಅರೆಭಾಷೆ ಸಂಸ್ಕೃತಿಲಿ ಪ್ರದರ್ಶನ ಕಲೆಗ”, 3:00 ಕ್ಕೆ ಕಾಂಚನ ಕೆದಂಬಾಡಿ ಅವು “ಹೊರಿಯವ್ವನ ಕೈರುಚಿ ಮತ್ತೆ ಅಡುಗೆ ಸಂಸ್ಕೃತಿ”, 3:30ಕ್ಕೆ ಡಾ|| ಪುನೀತ್ ರಾಘವೇಂದ್ರ ಕುಂಟುಕಾಡು ಅವು “ಆಟಿ ತಿಂಗಳ ನಾಟಿ ಮೊದ್ದು”, 3:50 ಕ್ಕೆ ಲಕ್ಷ್ಮಿನಾರಾಯಣ ಕಜೆಗದ್ದೆ ಅವು “ಭಾಷೆ ಮತ್ತೆ ಸಂಸ್ಕೃತಿನ ಬೆಳ್ಸ್’ವಲ್ಲಿ ಅಕಾಡೆಮಿಗಳ ಪಾತ್ರ”, 4:15ಕ್ಕೆ ಡಾ|| ಪುರುಷೋತ್ತಮ ಬಿಳಿಮಲೆ ಅವು “ಸ್ವಾಸ್ಥ್ಯ ಸಮಾಜಕ್ಕೆ ಭಾಂದವ್ಯದ ನಂಟ್‌ ಮತ್ತೆ ಭಾಷೆನ ಸಾಮರಸ್ಯ” ಈ ವಿಷಯಗಳ ವಿಚಾರ ಮಂಡನೆ ಆದೆ.

ಅದ್ ಅಲ್ಲದೇ ಈಗಾಗಲೇ ಬೇರೆ ಬೇರೆ ವಯೋಮಾನದವ್ಕೆ ಒಂದಷ್ಟ್ ಪೈಪೋಟಿಗ ನಡ್ಸಿದ್ದ್ ಅದರ ತೀರ್ಪು ಸ ನಾಳೆನೆ ಗೊತ್ತಾದೆ. ಅಭಿನಯ ಕಲಾಮಿಲನ ಟ್ರಸ್ಟ್ ಕಡೆಂದ ವಾಲಗ ಕೊಣ್ತ, ಸೂರಡಿ ಬಳಗದ ಕಡೆಂದ ಗಾದೆನ ಜೊಂಪೆ, ಅಮರ ಸಂಘಟನಾ ಸಮಿತಿ ಕಡೆಂದ ಅರೆಬಾಸೆಲಿ ಕಾರ್ಡ್ ಕಥೆ ಸ್ಪರ್ಧೆ, ರೂಪೇಶ್ ಫೋಟೋಗ್ರಫಿ ಕಡೆಂದ ಅರೆಬಾಸೆ ಸಂಸ್ಕೃತಿ, ಆಚಾರ ವಿಚಾರನ ಬಿಂಬಿಸುವ ಫೊಟೊಗ್ರಫೊ ಸ್ಪರ್ಧೆ, ಅರೆಬಾಸೆ ಮುಡ್ಪು ಪತ್ರಿಕೆ ಕಡೆಂದ ಪಿಳ್ಳಿಕಳ ಬಾಯಿಲಿ ಅಜ್ಜಿ ಕಥೆ ಸ್ಪರ್ಧೆನ ನಡ್ಸಿದ್ದೊ‌.

ಅಂತೂ ಹಳ್ಳಿ ಪರಿಸರದ ಭಾಷೆನ ವಿಶ್ವ ಮಟ್ಟಕ್ಕೆ ಏರ್ಸಿಕೆ ಹೊರ್ಟ ಈ ಪ್ರಯತ್ನ ಯಶಸ್ವಿ ಆಗಲಿ ತ ಈ ಹೊತ್ತ್’ಲಿ ಹಾರೈಸುನೊ‌. ಎಲ್ಲವೂ ಆಂಗಿಕ ಮಲ್ಟಿಮೀಡಿಯ ಫೇಸ್’ಬುಕ್ ಪೇಜ್ ಲಿ ಈ ಹಬ್ಬನ ನೋಡಕ್.

ಅರೆಭಾಷೆ ಬಳ್ಸ್’ನೋ, ಬೆಳ್ಸ್’ನೋ, ಉಳ್ಸ್’ನೋ.

✍ವಿನೋದ್ ಮೂಡಗದ್ದೆ

error: Content is protected !!