ಸೂರಡಿ ಕಡೆಂದ ಆಟಿ ತಿಂಗಳ ಅಡ್ಗೆ ಕೂಟ..

✍ವಿನೋದ್ ಮೂಡಗದ್ದೆ,

ಕೊಡಗ್ ಮತ್ತೆ ದಕ್ಷಿಣ ಕನ್ನಡ ಜಿಲ್ಲೆನ ಅರೆಭಾಷಿಗರ್ ಒಟ್ಟಾಗಿ ಆಚರ್’ಸುವ ಒಂದೇ ಹಬ್ಬ ಹೇಳ್ರೆ ಅದ್ ಆಟಿ. ಈ ಹಬ್ಬದ ವಿಶೇಷ ತ ಹೇಳ್ರೆ ತಿಂಡಿ‌ ತಿನ್ಸ್’ಗ.

ಈ ತಿಂಗಳ್ಲಿ‌ ಪ್ರಕೃತಿಲಿ ಸಿಕ್ಕುವ ಬಾಳಷ್ಟ್ ಸೊಪ್ಪು ತರಕಾರಿಗಳ್ಲಿ‌ ವಿಶೇಷ ಮೊದ್ದುನ ಅಂಶ ಇದ್ದದೆ ತ ನಂಬಿಕೆ. ಅದ್ ನಮ್ಮ ಸರ್ರಕ್ಕೆ ಬೇಕಾದ ಒಳ್ಳ ಅಂಶಗ ಸಿಕ್ಕಿದೆ ತ ಹಿರಿಯವ್ ಕಂಡ್’ಕಂಡೊಳೊ.

ಈಗಿನ ಆಧುನಿಕ ಕಾಲಲಿ ಫಾಸ್ಟ್ ಫುಡ್ ಮಾಡಿ ತಿಂಬೊ ಜನಕೆ ಪಂಡ್’ನ ಅಡಿಗೆಗ ಮರ್ತ್ ಹೋಕೆ ಬೊತ್ತ್ ತೇಳೋ ನಿಟ್ಟ್’ಲಿ ಸೂರಡಿ ಫೇಸ್ ಬುಕ್ ಪೇಜ್ ನ ಕಡೆಂಡ ಆಟಿ ತಿಂಗಳ ಅಡುಗೆ ಕೂಟನ ಆಯೋಜನೆ ಮಾಡಿದ್ದೊ.

ಇಂದ್ ಮಧ್ಯಾಹ್ನ ೧೨:೩೦ ಗಂಟೆಗೆ ಶ್ರೀಮತಿ‌ ಮಿಲನಾ ಕೆ ಭರತ್ ಅವು ಒಳ್ಳೆಮೆಣ್ಸ್ ಸಾರ್ ಮಾಡಿ ಈ ಜಂಬರಕೆ ಚಾಲನೆ ಕೊಟ್ಟೊ. ಕಡೆಗೆ ಸವಿತ ಜಯದೇವ ಉಜಿರೆ ಅವ್ ಮಾಡ್ದ ಕಣಿಲೆ ವಡೆ, ನಿರ್ಲಾಕಿದ ಮಾಯ್ಣಣ್ಣ್, ಪುನಾರ್ಪುಳಿ ಸಾರ್’ನ ಪ್ರಾತ್ಯಕ್ಷಿತೆ ತೋರ್ಸಿದೊ.

ಬಿಂದು‌ ಕೀರ್ತಿರಾಜ್ ಅವು ಹಲ್ಸ್’ನ ಹಣ್ಣ್ ಹಲ್ವ, ಉಡ್ಲಂಗೆ, ಚಂದ್ರಾವತಿ ಬಡ್ಡಡ್ಕ ಅವು ಹಲ್ಸ್’ನಕ್ಕಿ ಪೊಜ್ಜಿ, ಯೋಗಿತಾ ಗೋಪಿನಾಥ್ ಅವು ಮೂಡೆ ಹಿಟ್ಟ್, ಹವ್ಯಶ್ರೀ ಪಾಲ್ತಾಡಿ ಅವು ಚಗ್ತೆ ಅಂಬಡೆ, ಪ್ರೀತಿಕಾ ವಿನೋದ್ ಮೂಡಗದ್ದೆ ಇವು ಚರ್ಮೆಸೊಪ್ಪು ಪಲ್ಯ, ಧರ್ಮಾವತಿ ವಿಟ್ಲ ಇವು ಉಪ್ಪುನತೋಳೆ, ನುಗ್ಗೆಸೊಪ್ಪು, ಚಟ್ಟಂಬಡೆ, ಪತ್ರೊಡೆ, ಕವನ ಅವು ತಾಮ್ರಾಣಿ ಸೊಪ್ಪು ಪೋಡಿ, ಎಲೆ ಪೋಡಿ, ಚೈತ್ರ ಪುರ ಇವು ಚಗ್ತೆ ಹಲ್ಸ್’ನಕ್ಕಿ ಪಲ್ಯ, ಲೋಕೇಶ್ವರಿ ವಳಂಬ್ರ ಇವು ಮೆಂತೆ ಅಡ್ಗೆ, ಬೈನೆ ಹಲ್ವ, ಅವ್ಲೆಕ್ಕಿ ಮನರ, ಪತ್ರೊಡೆ ಫ್ರೈ ಮತ್ತೆ ಉಪ್ಪುಕರಿ, ಪವಿತ್ರ ಶಂಕರ್ ಉಳುವಾರು ಇವು ಕಣಿಲೆ ಗೈಪು ಪತ್ರೊಡೆ ಉಪ್ಪುಕರಿ ನ ಮಾಡಿ ಹಂಗೆ ಮಾಡುವ ವಿಧಾನನ ಬಾಳ ಲಾಯ್ಕಲಿ ವಿವರಿಸಿ ನೋಡಿಗರ ಬಾಯಿ ನೀರ್ ಆಗುವಂಗೆ ಮಾಡ್ದೊ.

ಇಡೀ ಜಂಬರದ ನಿರ್ವಹಣೆನ ಸೂರಡಿ ಬಳಗದ ಪರವಾಗಿ ಡಾ| ಪುನೀತ್ ರಾಘವೇಂದ್ರ ಕುಂಟುಕಾಡು ಇವು ಅಚ್ಚ್’ಕಟ್ಟಾಗಿ ನಿರ್ವಹಿಸಿದೊ‌. ಈ ಮೂಲಕ ಆದರೂ ನಮ್ಮ ಹಿರಿಯರ ಕಾಲಲಿ ಮಾಡಿಕಂಡ್ ಬರ್ತಾ ಇದ್ದ ವಿಶೇಶ ತಿನ್ಸ್’ಗ ನಮ್ಮ‌ ಮುಂದೆನ ಪೀಳಿಗೆಗೆ ಪರಿಚಯ ಮಾಡ್ಸಿದ ಕೀರ್ತೀ ಈ ‌ಅಡ್ಗೆಕೂಟಕ್ಕೆ ಸಿಕ್ಕಿದೆ‌.

✍ವಿನೋದ್ ಮೂಡಗದ್ದೆ,

error: Content is protected !!