May 24, 2021

ನೂರೆಂಟು

ನೊಂದ ಜೀವಗಳು
ಬೆಂದು ಹೋಗುತಿವೆ
ಕಾರಣ ಹುಡುಕುವ
ಆವರಣದಲ್ಲೇ ಕೆಡುಕಾಗುತಿದೆ

ಕರುನಾಡಿನಲ್ಲಿ ಕರೋನಾ
ಕಾಡುತಿದೆ
ಕವಚದ ಬಲವನ್ನು
ನೆಲಸಮ ಮಾಡುತ್ತಿದೆ

ದುಡಿಯುವ ಕೈಗಳು
ಬಲಹೀನವಾಗುತ್ತಾ
ಕಳಹೀನವಾಗುತ ಅಡಿಯಾಳಗುವ ಬಂಧನದಲಿ

ಕುಟುಂಬದ ಕೂಸುಗಳನ್ನು
ಸಲಹುವ ಕಂದನ ಅಮ್ಮನಂತೆ
ಕನಸಿನಲ್ಲಿ ಕೊರಗುತ್ತಾ

ಕಾಸನ್ನು ಕೂಡಿಕೊಳ್ಳಲು
ಬಯಸುತ್ತಿರುವ
ಬಯಕೆಯ ಬಣ್ಣಗಳು
ಕನವರಿಸುತ್ತಿವೆ ನಮ್ಮಯ ಜೀವಗಳು

ರಂಜಿತ್ ಕುದುಪಜೆ, ಭಾಗಮಂಡಲ

error: Content is protected !!