fbpx

ಗಾಳಿ ಮಳೆಗೆ ಕಾರ್ಮಿಕ ದುರ್ಮರಣ

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಭಾರೀ ಗಾಳಿಗೆ ಮರವೊಂದು ಬಿದ್ದ ಪರಿಣಾಮ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ವಿರಾಜಪೇಟೆಯ ಅಮ್ಮತ್ತಿ ಹೊಸ್ಕೋಟೆಯಲ್ಲಿ ನಡೆದಿದೆ.

ಇಲ್ಲಿನ ಗುಹ್ಯ ಗ್ರಾಮದ ಕಕ್ಕಟ್ಟುಕಾಡವಿನ ನಿವಾಸಿಯಾಗಿರುವ ಪ್ರಕಾಶ್ (45)ಮೃತ ಕಾರ್ಮಿಕ.
ಹಸ್ಕೋಟೆಯ ಸೋಮಣ್ಣ ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಒಣಗಿದ ಮರವೊಂದು ಪ್ರಕಾಶ್ ಮೇಲೆ ಬಿದಿದ್ದು, ತಲೆಗೆ ಗಂಭೀರ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ವಿರಾಜಪೇಟೆಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರಸಂತೆಯಲ್ಲಿ ಮನೆಯ ಗೋಡೆ ಕುಸಿತದಿಂದ ಮೃತಪಟ್ಟಿರುವ ವಸಂತಮ್ಮ ಸಾವಿನ ನಂತರ ನಡೆದ ಮಳೆಯಿಂದಾದ ಎರಡನೇ ದುರಂತವಿದು.

error: Content is protected !!