ಬೇಟೆಗಾರನಿಂದ ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ

ಕೊಡಗು: ಕಾಡುಹಂದಿ ಬೇಟೆ ಮಾಡಿದ್ದ ವ್ಯಕ್ತಿಯಿಂದ ಅರಣ್ಯ ಸಿಬ್ಬಂದಿಗಳ ಮೇಲ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ ಘಟನೆ ಕಾಜೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವಸಂತ್ ಅಲಿಯಾಸ್ ರುದ್ರ, ಭೀಮಯ್ಯ, ಸುಬ್ರಮಣಿ ಎಂಬುವವರು ಬೇಟೆಯಾಡಿ ಮಾಂಸ ಮಾಡಿರುವ ಆರೋಪದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ವಸಂತ್ ಮನೆ ಮೇಲೆ ದಾಳಿ ನಡೆಸಿದ ಸಂದರ್ಭ ಹಲ್ಲೆ ನಡೆದಿದೆ,ಈ ಸಂದರ್ಭ ವಸಂತ್ ಮನೆಯಲ್ಲಿನ ಕತ್ತಿಯಿಂದ ವಾಚರ್ ಪ್ರಸಾದ್ ಮೇಲೆ ದಾಳಿ ಮಾಡಿದ್ದು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಇದೇ ಸಂದರ್ಭ ಇಲಾಖೆಯ ವಾಹನದ ಮೇಲೂ ದಾಳಿ ಮಾಡಿ ತಪ್ಪಿಸಿಕೊಳ್ಳುವ ಯತ್ನ ನಡೆದಿದೆ. ಅಂದಾಜು ಅರ್ಧ ಗಂಟೆ ಬಳಿಕ ವಸಂತ್ ನನ್ನು ಬಂಧಿಸಿ 3 ಕೆ ಜಿ ಮಾಂಸ ವಶಕ್ಕೆ ಪಡೆಯಲಾಗಿದ್ದು, ಹಲ್ಲೆ ಮತ್ತು ವನ್ಯಜೀವಿ ಕಾಯ್ದೆ ಪ್ರಕಾರ ದೂರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

error: Content is protected !!