ಪ್ರತ್ಯೇಕ ಪ್ರಕರಣ : ಮರ,ಜೀಪು ವಶ

ಕೊಡಗು: ಅಕ್ರಮ ಬೀಟೆ ಮರ ಕಡಿದು ಸಾಗಾಟ ಮಾಡುತ್ತಿದ್ದ ಸಂದರ್ಭ ಅರಣ್ಯ ಇಲಾಖೆ ದಾಳಿ ನಡೆಸಿದ್ದು ಜೀಪು ಸಮೇತ 4 ಲಕ್ಷದ ನಾಟಾವನ್ನು ವಶಕ್ಕೆ ಪಡೆಯಲಾಗಿದೆ.ಸುಂಠಿಕೊಪ್ಪದ ತೋಟವೂಂದರಲ್ಲಿ ಕಡಿದು ಸಂಗ್ರಹಿಸಿಟ್ಟು ಬಳಿಕ ಸಾಗಾಟ ನಡೆಸುತ್ತಿದ್ದ ವೇಳೆ ಈ ದಾಳಿ ನಡೆದಿದ್ದು ಆರೋಪಿಗಳಾದ ಹುದೂಸ್ ಮತ್ತು ರಜಾ಼ಕ್ ತಲೆ ಮರೆಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮನೆಯಲ್ಲಿ ಸಂಗ್ರಹಿಸಿ ಇಡಲಾಗಿದ್ದ ತೇಗದ ಮರವನ್ನು ಏಳನೇ ಹೊಸಕೋಟೆಯಲ್ಲಿ ವಶಕ್ಕೆ ಪಡೆಯಲಾಗಿದೆ ಆನೆಕಾಡು ವಿಭಾದ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಮರ ಮತ್ತು ಮನೆ ಮಾಲೀಕ ಸುರೇಶ್ ರನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!