ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಪ್ರತ್ಯಕ್ಷವಾದ ವಿಷಪೂರಿತ ಹಾವು

ಸಿದ್ದಾಪುರ: ಇಲ್ಲಿನ ಬಸ್ ನಿಲ್ದಾಣದಲ್ಲಿ ರಾತ್ರಿ ಸಮಯದಲ್ಲಿ ಹಾವೊಂದು ಪ್ರತ್ಯಕ್ಷಗೊಂಡ ವಿಷಪೂರಿತ ಹಾವೊಂದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಾಯಿತು. ಗುಹ್ಯ ಗ್ರಾಮದ ಉರಗ ಸಂರಕ್ಷಕ ಸ್ನೇಕ್ ಸುರೇಶ್ ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ರಕ್ಷಿಸಿದರು. ಕೋರಲ್ ಸ್ನೇಕ್ ಎಂಬ ಹಾವಾಗಿದ್ದು, ಹಾವುಗಳನ್ನು ಕಂಡರೆ ದಯವಿಟ್ಟು ಯಾರೂ ಹಾವುಗಳನ್ನು ಕೊಲ್ಲಬೇಡಿ. ಮಾಹಿತಿ ನೀಡಿದರೆ ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗುವುದು ಎಂದು ಸ್ನೇಕ್ ಸುರೇಶ್ ಸಾರ್ವಜನಿಕರಿಗೆ ಮಾಹಿತಿ ನೀಡಿದರು.