ಶ್ರೀನಗರದಲ್ಲಿ ಹುತಾತ್ಮ ಅಲ್ತಾಫ್ ಅಹಮದ್ ರಿಗೆ ಅಂತಿಮ ಗೌರವ: ನಾಳೆ ಅಂತ್ಯಕ್ರಿಯೆ

ದೇಶದ ಗಡಿ ಶ್ರೀನಗರದಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ಹಿಮಪಾತಕ್ಕೆ ಸಿಲುಕಿ ಮೃತಪಟ್ಟಿರುವ ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ಯೋಧ ಯು.ಅಲ್ತಾಫ್ ಅಹಮದ್ ಮೃತದೇಹ ಶ್ರೀನಗರದಿಂದ ಸೇನೆಯ ಅಂತಿಮ ಗೌರವದೊಂದಿಗೆ ಬೆಂಗಳೂರಿಗೆ ಆಗಮಿಸಲಿದ್ದು ,ನಾಳೆ ಬೆಳಗ್ಗೆ 7.30ಕ್ಕೆ ಅಲ್ತಾಫ್ ಅಹಮದ್ ಕುಟುಂಬ ನೆಲೆಸಿರುವ ಕೇರಳದ ಮಟ್ಟನೂರಿನ ಸ್ವಗ್ರಾಮದಲ್ಲಿ ಸಕಲ ಸೇನೆಯ ಗೌರವ ದೊಂದಿಗೆ ನಡೆಯಲಿದೆ.