ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು

ಕುಶಾಲನಗರ ತಾಲ್ಲೂಕಿನ ಗಡ್ಡೆಹೊಸೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿನ ರಂಗ ಸಮುದ್ರದಲ್ಲಿ ವಿದ್ಯುತ್ ತಂತಿಗೆ ಅಲುಮಿನಿಯಂ ಏಣಿ ಪ್ರವಹಿಸಿ ಮೃತಪಟ್ಟ ಘಟನೆ ನಡೆದಿದೆ.

ಇಲ್ಲಿನ ನೆಕ್ಕೆರೆ ದೀಕ್ಷೀತ್ (23) ಮೃತ ಯುವಕನಾಗಿದ್ದು, ಮನೆಯ ಸಮೀಪದ ತೋಟದಲ್ಲಿ ಕಾಳುಮೆಣಸಿನ ಕುಯಿಲು ಮಾಡುತ್ತಿರುವ ಸಂದರ್ಭ ಘಟನೆ ಸಂಭವಿಸಿದ್ದು, ದೀಕ್ಷಿತ ಸ್ಥಳದಲ್ಲೇ ಮೃತಪಟ್ಟಿದ್ದಾನೆ .