ಮಳೆಗೆ ಮೇಕೆ ಸಾವು

ವಿರಾಜಪೇಟೆ: ದಕ್ಷಿಣ ಕೊಡಗಿನ ವ್ಯಾಪ್ತಿಯಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ಶ್ರೀಮಂಗಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿನ ತಾವಳಗೇರಿಯಲ್ಲಿ ಚಳಿ ತಾಳಲಾರದೆ ಎರಡು ಮೇಕೆಗಳು ಮೃತಪಟ್ಟಿದೆ. ಚಂದ್ರಶೇಖರ್ ಎಂಬುವವರಿಗೆ ಸೇರಿದ ಮೇಕೆಗಳು ಕೊಟ್ಟಿಗೆಯಲ್ಲೇ ಮೃತಪಟ್ಟಿದ್ದು, ಸ್ಥಳಕ್ಕೆ ಶ್ರೀಮಂಗಲ ಪಶುವೈದ್ಯರು ಪರಿಶೀಲನೆ ನಡೆಸಿದ್ದಾರೆ.