ಮರ ಬಿದ್ದು ಕಾಫಿ ಗಿಡಗಳು ನಾಶ

ವಿಪರೀತ ಗಾಳಿಯ ಪರಿಣಾಮ ತೋಟದಲ್ಲಿ ಬೆಳೆದಿದ್ದ ಬೃಹತ್ ಮರವೊಂದು ಬಿದ್ದ ಪರಿಣಾಮ ಅಪಾರ ಪ್ರಮಾಣದ ಕಾಫಿ ಗಿಡಗಳು ನಾಶವಾದ ಘಟನೆ ನಡೆದಿದೆ.
ವಿರಾಜಪೇಟೆ ತಾಲ್ಲೂಕಿನ ಕಿರುಗೂರು ಭಾಗದಲ್ಲಿ ನಿರಂತರವಾಗಿ ಗಾಳಿ ಬೀಸುತ್ತಿದ್ದು, ರೈತ ಆನೆ ಮಾಡ ಮಂಜುನಾಥ್ ಎಂಬುವವರಿಗೆ ಸೇರಿದ ತೋಟದಲ್ಲಿ ಇದ್ದ ಗೋಳಿ ಮರ ಬಿದ್ದು 25ಕ್ಕೂ ಹೆಚ್ಚು ಕಾಫಿ ಗಿಡಗಳು ನಾಶ ಹೊಂದಿದೆ.