ಮದ್ಯ ಮಾರಾಟ ಮಳಿಗೆ ತೆರೆಯುವಂತೆ ಮನವಿ

ಕೊಡಗಿನಲ್ಲಿ ಅಬಕಾರಿ ಸನ್ನದುದಾರರು ನಿರಂತರ ಸಮಸ್ಯೆ ಎದುರಿಸುತ್ತಿದ್ದು, ಆಗಿಂದಾಗ್ಗೆ ಮದ್ಯ ಮಾರಾಟ ಮಳಿಗೆಗಳು ಮುಚ್ಚುವಂತೆ ಜಿಲ್ಲಾಡಳಿತ ಸೂಚನೆ ನೀಡುತ್ತಿರುವುದರಿಂದ ಸರ್ಕಾರಕ್ಕೆ ಪ್ರತಿನಿತ್ಯ ತೆರಿಗೆ ಪಾವತಿಸಲು,ಮಳಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ವೇತನ ನೀಡಲು ನಷ್ಟವಾಗುತ್ತಿದೆಯಲ್ಲದೆ ಕಾಳ ಸಂತೆಯಲ್ಲಿ,ಇಲ್ಲವೇ ಪಕ್ಕದ ಜಿಲ್ಲೆಯತ್ತ ಗ್ರಾಹಕರು ತೆರಳುತ್ತಿರುವ ಹಿನ್ನೆಲೆಯಿಂದ ಸನನ್ದುದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಾಲ್ಲೂಕು ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷರಾದ ಕಾಡ್ಯಮಾಡ ಎಸ್.ಅಯ್ಯಪ್ಪ ಮುಂದಾಳತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರ ಮೂಲಕ ಮನವಿ ಸಲ್ಲಿಸಲಾಗಿದೆ