ಮಡಿಕೇರಿ ದಸರಾ ಬಹುಭಾಷೆ ಕವಿಗೋಷ್ಠಿಗೆ ಕವನಗಳ ಆಹ್ವಾನ

ಮಡಿಕೇರಿ ಸೆ.14:-ನಾಡಹಬ್ಬ ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಏರ್ಪಡಿಸಲಾಗಿರುವ ದಸರಾ ಬಹುಭಾಷೆ ಕವಿಗೋಷ್ಠಿ ಅಕ್ಟೋಬರ್ 4 ರಂದು ನಡೆಯಲಿದೆ.
ಕನ್ನಡ, ಕೊಡವ, ಅರೆಭಾಷೆ, ತುಳು, ಮಲಯಾಳಂ, ತಮಿಳು, ಬ್ಯಾರಿ, ಕೊಂಕಣಿ, ಹವ್ಯಕ, ಮರಾಠಿ, ತೆಲುಗು, ಹಿಂದಿ, ಕುರುಬ, ಯರವ, ಆಂಗ್ಲ ಹೀಗೆ ವಿವಿಧ ಭಾμÉಗಳಲ್ಲಿ ಕವಿಗಳು ಕವನ ವಾಚನ ಮಾಡಬಹುದಾಗಿದೆ. ಸ್ವರಚಿತ, ಇದುವರೆಗೆ ಎಲ್ಲಿಯೂ ಪ್ರಕಟಗೊಳ್ಳದ, ವಾಚಿಸಲ್ಪಡದ, ಇಪ್ಪತ್ತು ಸಾಲುಗಳಿಗೆ ಸೀಮಿತವಾದ ಕವನಗಳನ್ನು ಕಳಹುಹಿಸಿಕೊಡಬಹುದಾಗಿದೆ.
ಕವನಗಳನ್ನು ಸೆ.21ರೊಳಗೆ ಕುಡೆಕಲ್ ಸಂತೋμï, ಅಧ್ಯಕ್ಷರು, ಮಡಿಕೇರಿ ದಸರಾ ಬಹುಭಾμÁ ಕವಿಗೋಷ್ಠಿ ಸಮಿತಿ, ಶಕ್ತಿ ದಿನಪತ್ರಿಕೆ ಕಾರ್ಯಾಲಯ, ಕೈಗಾರಿಕಾ ಬಡಾವಣೆ, ಈ ವಿಳಾಸಕ್ಕೆ ಅಥವಾ ಡಿಟಿಪಿ ಮಾಡಿಸಿ kudekalsanthu@gmail.com ವ್ಯಾಟ್ಸಪ್ ಸಂಖ್ಯೆ 8762110948, 7795060505 ಈ ವಿಳಾಸಕ್ಕೆ ಕಳುಹಿಸಿಕೊಡಬಹುದು. ಕೊನೆಯ ದಿನಾಂಕದ ನಂತರ ಬರುವ ಕವನಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ಮೊ. 9972538584 ಅನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ದಸರಾ ಬಹುಭಾμÁ ಕವಿ ಗೋಷ್ಠಿ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎನ್.ನಾಸಿರ್ ತಿಳಿಸಿದ್ದಾರೆ.