ಬೆಳೆ ನಷ್ಟದ ಸಮೀಕ್ಷೆಗೆ ತಂಡ ರಚಿಸಿ ಸ್ಥಳ ತನಿಖೆ


ಬೆಳೆ ನಷ್ಟದ ಸಮೀಕ್ಷೆ ನಿಮಿತ್ತ ತಂಡ ರಚಿಸಿ ಆದೇಶಿಸಿರುವಂತೆ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಲ್ಲು, ಕಲ್ಲಳ, ಚಡಾವು ಹಾಗೂ ಕೊಯಾನಾಡು ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಿಂದಾಗಿ ಹಾನಿಗೊಳಗಾದ ರಬ್ಬರ್, ಅಡಿಕೆ, ಕಾಫಿ ಹಾಗೂ ಭತ್ತ ಬೆಳೆಗಳನ್ನು ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಅಧಿಕಾರಿ ಮಡಿಕೇರಿ ತಾಲೂಕು, ತೋಟಗಾರಿಕಾ ಅಧಿಕಾರಿ ಸಂಪಾಜೆ ಇವರ ಜೊತೆ ಜಂಟಿಯಾಗಿ ಸ್ಥಳ ತನಿಖೆ ಮಾಡಲಾಗಿರುತ್ತದೆ.

ಈ ಸಂದರ್ಭದಲ್ಲಿ ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಲೆಕ್ಕಧಿಕಾರಿ, ಗ್ರಾಮ ಸಹಾಯಕರು ಹಾಜರಿದ್ದರು.