ಬೆಟ್ಟತ್ತೂರಿನಲ್ಲಿ ಕಾಡಾನೆ ದಾಂಧಲೆ



ಕಳೆದ ಮಳೆಗೆ ಭತ್ತದ ಗದ್ದೆ ಮುಳುಗಡೆ, ಗುಡ್ಡಕುಸಿತ, ಸುಬ್ರಹ್ಮಣ್ಯ ದೇವಸ್ಥಾನದ ತಡೆಗೋಡೆ ಕುಸಿತದ ನಡುವೆಯೂ ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರಿನ ಕೊಂಪುಳೀರ ಕುಟುಂಬದ ದೊಡ್ಡಮನೆ ಬಳಿಯ ಅಪ್ಪಣ್ಣ ಎಂಬುವವರ ಮನೆ ಸುತ್ತಮುತ್ತ ಕಾಡಾನೆ ದಾಂಧಲೆ ಮಾಡಿದ್ದು, ಕಾಫಿ,ಬಾಳೆ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ. ಬಿಟ್ಟುಬಿಡದ ಮಳೆಗೆ ಇರುವ ಫಸಲನ್ನು ಉಳಿಸಿಕೊಂಡರೆ, ಸಾಕು ಎಂದಿರುವ ಇಲ್ಲಿನ ಗ್ರಾಮಸ್ಥರ ಪಾಲಿಗೆ ಇದು ಗಾಯದ ಬರೆ ಎಳೆದಂತಾಗಿದೆ.