ಪ್ರವಾಹ ಪೀಡಿತ ಪ್ರದೇಶಗಳ ಜನ ಹೈರಾಣು!
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಪೀಡಿತ ಪ್ರದೇಶವಾದ ಕುಶಾಲನಗರದ ಕಾವೇರಿ ತಟದಲ್ಲಿರುವ ಕಾವೇರಿ ಬಡಾವಣೆ, ಕುವೆಂಪು ಬಡಾವಣೆಯ ಬಹುಭಾಗ ನದಿ ಪಾಲಾಗಿದೆ.
ಇದಲ್ಲದೆ ಇತ್ತೀಚೆಗೆ ನಿರ್ಮಾಣ ಮಾಡಿದ ಉದ್ಯಾನವನ ಸಹ ಕೊಚ್ಚಿಹೋಗಿದ್ದು. ಈ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡುವ ಮೂಲಕ ಬಡಾವಣೆಯನ್ನು ಉಳಿಸಲು ಕ್ರಮ ಕೈಗಿಳ್ಳುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.