ಪಠ್ಯ ಪುಸ್ತಕಗಳಿಂದ ಹೊರಗುಳಿಯಲಿದೆ ಟಿಪ್ಪು ಕುರಿತಾದ ಸತ್ಯವಲ್ಲದ ವಿಚಾರಗಳು: ಸಚಿವ ಬಿ.ಸಿ ನಾಗೇಶ್

ಟಿಪ್ಪುವಿನ ಸತ್ಯವಲ್ಲದ ವಿಚಾರಗಳನ್ನು ಕೈಬಿಟ್ಟು ಪಠ್ಯಪುಸ್ತಕ ಸಿದ್ದಪಡಿಸಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಹಾಗು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಅವರು ಶಾಲಾ ಪಠ್ಯಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ವೈಭೀಕರಣ ವಿಚಾರವಾಗಿ ಮಾತನಾಡಿದ ಅವರು ಶಾಸಕ ಅಪ್ಪಚ್ಚು ರಂಜನ್ ಬ್ರಿಟೀಷ್ ಲೈಬ್ರರಿ ಸೇರಿದಂತೆ ಹಲವು ಪುಸ್ತಕ ನೀಡಿದ್ದು, ನಿಜ ಸಂಗತಿ ಅರಿಯುವ ಸಲುವಾಗಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಕೆಲಸ ಮಾಡಲಾಗುತ್ತಿದ್ದು, ಅಸಲಿಯತ್ತು ತಿಳಿದುಕೊಳ್ಳುವ ಕಾರ್ಯ ನಡೆಸಲಾಗುತ್ತಿದೆ ಎಂದರು.