ನಕ್ಷತ್ರ ಆಮೆ ಮಾರಾಟ ಜಾಲ:ಇಬ್ಬರ ಬಂಧನ

ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ನಿಂದ ಹಾರಂಗಿ ತೆರಳುವ ಮಾರ್ಗದ, ಬೊಳ್ಳೂರು – ಮಾದಾಪಟ್ಟಣ ಜಂಕ್ಷನ್ ನಲ್ಲಿ ಜಗದೀಶ್ ಕುಮಾರ್ ಮತ್ತು ಶೇಖ್ ಗೈಬೂಸಾ ಬಾಷಾ ಎಂಬುವವರು ಅಕ್ರಮವಾಗಿ ಅಪರೂಪದ ಜೀವಂತ ನಕ್ಷತ್ರ ಆಮೆಯನ್ನು ವಶದಲ್ಲಿಟ್ಟುಕೊಂಡು ಮಾರಟ ಮಾಡಲು ಯತ್ನಿಸುತ್ತಿದ್ದ ವೇಳೆಲಿ ಐ ಡಿ ಪೊಲೀಸ್ ಅರಣ್ಯ ಘಟಕದ ತಂಡ ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆಮೆಯನ್ನು ವಶ ಪಡೆಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.