ಆಕಾಶವಾಣಿಯಿಂದ ಕೇಂದ್ರೀಕೃತ ಪ್ರಸಾರ – ಸ್ಥಳೀಯ ಕಾರ್ಯಕ್ರಮಗಳ ಮೇಲೆ ಎಫೆಕ್ಟ್ ಸಾಧ್ಯತೆ

ಅನಿಲ್ ಹೆಚ್ ಟಿ: ವಿಶೇಷ ವರದಿ
ರಾಜ್ಯದ ಪ್ರಾದೇಶಿಕ ಕೇಂದ್ರಗಳಿಂದ ಬಿತ್ತರವಾಗುತ್ತಿದ್ದ ಕಾಯ೯ಕ್ರಮಗಳನ್ನು ಕೇಂದ್ರೀಕೖತಗೊಳಿಸಲು ಮುಂದಾಗಿರುವ ಆಕಾಶವಾಣಿ ಈ ಮೂಲಕ ಮಹತ್ವದ ಮರುಬ್ರ್ಯಾಂಡಿಂಗ್ ಸೇವೆ ಜಾರಿಗೊಳಿಸಲಿದೆ.
ಇದರಿಂದಾಗಿ ಮಡಿಕೇರಿ ಎಫ್.ಎಂ. ಕೇಂದ್ರದಿಂದ ಬಹುತೇಕ ಕಾಯ೯ಕ್ರಮಗಳು ಸ್ಥಗಿತಗೊಳ್ಳಲಿದ್ದು ಎಲ್ಲಾ ಕಾಯ೯ಕ್ರಮಗಳನ್ನು ಬೆಂಗಳೂರು ಆಕಾಶವಾಣಿ ಕೇಂದ್ರವೇ ನಿವ೯ಹಿಸಲಿದೆ.
ಕೇಂದ್ರ ಸಕಾ೯ರಿ ಸ್ವಾಮ್ಯದ ಪ್ರಸಾರ ಭಾರತಿಯು ದೇಶದ ವಿವಿದೆಡೆಯ ಬಾನುಲಿ ಕೇಂದ್ರಗಳನ್ನು ಒಟ್ಟುಗೂಡಿಸಿ ಜನವರಿ 26 ರ ಗಣರಾಜ್ಯೋತ್ಸವದಂದು ಏಕ್ ಭಾರತ್ – ಏಕ್ ರೆಡಿಯೋ ಎಂಬ ಮಹತ್ವದ ಮಾಧ್ಯಮ ಯೋಜನಗೆ ಮುಂದಾಗಿದೆ. ಈ ಮರುಬ್ರ್ಯಾಂಡಿಂಗ್ ನಿಂದಾಗಿ ಆಯಾ ರಾಜ್ಯಗಳ ರಾಜಧಾನಿಯಲ್ಲಿರುವ ಆಕಾಶವಾಣಿಯ ಮುಖ್ಯ ಕೇಂದ್ರಗಳೇ ಎಲ್ಲಾ ಕಾಯ೯ಕ್ರಮಗಳನ್ನು ರೂಪಿಸಲಿದೆ.
ಈ ಬಗ್ಗೆ ಇನ್ನಷ್ಟೇ ಅಧಿಕೖತ ಪ್ರಕಟಣೆ ಬರಬೇಕಾಗಿದೆಯಾದರೂ ಎಲ್ಲಾ ಆಕಾಶವಾಣಿ ಕೇಂದ್ರಗಳಿಗೆ ಅನಧಿಕೖತವಾಗಿ ಇಂಥದ್ದೊಂದು ಸಂದೇಶ ದೊರಕಿದೆ.
ಆಕಾಶವಾಣಿಯ ನಿಗಧಿತ ಕಾಯ೯ಕ್ರಮಗಳಿಗೆ ಜನವರಿ 26 ರಿಂದ ಒಂದೇ ವೇಳಾ ಪಟ್ಟಿ ಇರುತ್ತದೆ.
ಇದರಿಂದ ಏನಾಗಲಿದೆ?
ಬೆಂಗಳೂರು ಆಕಾಶವಾಣಿ ಕೇಂದ್ರದ ಈ ಏಕಸ್ವಾಮ್ಯದಿಂದಾಗಿ ಮಡಿಕೇರಿ, ಹಾಸನ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಎಫ್.ಎಂ.ಕೇಂದ್ರ ಸೇರಿದಂತೆ ಕನಾ೯ಟಕದ 9 ಬಾನುಲಿ ಕೇಂದ್ರಗಳ ಕಾಯ೯ಕ್ರಮಗಳು ಬೆಂಗಳೂರು ಕೇಂದ್ರದ ಮೂಲಕವೇ ಪ್ರಸಾರವಾಗಲಿದೆ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಬೆಂಗಳೂರು ಕೇಂದ್ರವೇ ಕಾಯ೯ಕ್ರಮಗಳ ಸ್ವರೂಪ ನಿಧ೯ರಿಸಲಿದ್ದು, ಯಾವ ಹೊತ್ತಿನಲ್ಲಿ ಯಾವ ಕಾಯ೯ಕ್ರಮ ಪ್ರಸಾರ ಮಾಡಬೇಕೆಂಬ ತೀಮಾ೯ನ ಕೈಗೊಳ್ಳಲಿದೆ.
ಇದು ಜಾರಿಗೆ ಬಂದದ್ದೇ ಆದಲ್ಲಿ ಕೊಡಗು ಜಿಲ್ಲೆಯ ಜನತೆಗೆ ಬಹಳ ದೊಡ್ಡ ನಷ್ಟವಾಗಲಿದೆ. ಕೊಡಗು ಎಫ್ ಎಂ ನಲ್ಲಿ ಪ್ರಸಾರವಾಗುತ್ತಿದ್ದ ಕೊಡವ, ಅರೆಭಾಷೆ, ಬ್ಯಾರಿ, ತುಳು ಕಾಯ೯ಕ್ರಮಗಳು ಜಿಲ್ಲೆಯಲ್ಲಿ ಬಹಳಷ್ಟು ಶ್ರೋತೖಗಳಿಗೆ ವರದಾನವಾಗಿದ್ದವು. ಕೊಡವ, ಅರೆಭಾಷಾ ವಾತೆ೯ಗಳು ಕೂಡ ಅಪಾರ ಶ್ರೋತೖಗಳನ್ನು ಹೊಂದಿದ್ದವು. ಆಕಾಶವಾಣಿಯಲ್ಲಿ ಪ್ರಸಾರವಾಗುವ ನಿಧನ ಸುದ್ದಿ ಬಹುತೇಕರಿಗೆ ಪರಿಚಯಸ್ಥರ ನಿಧನದ ಮಾಹಿತಿಯನ್ನು ಕೂಡಲೇ ಒದಗಿಸುತ್ತಿತ್ತು.
ಪ್ರಾದೇಶಿಕ ಭಾಷೆಗಳಾದ ಕೊಡವ, ಅರೆಭಾಷೆ ಕಾಯ೯ಕ್ರಮಗಳಿಂದಾಗಿ ಜಿಲ್ಲೆಯ ಅನೇಕ ಪ್ರತಿಭೆಗಳು ಬೆಳಕಿಗೆ ಬಂದಿದ್ದವು. ಕಲಾವಿದರು, ಕಲಾಸಂಸ್ಥೆಗಳು, ಶಾಲಾ ವಿದ್ಯಾಥಿ೯ಗಳು, ಕವಿಗಳು, ಸಾಹಿತಿಗಳು, ಲೇಖಕರು, ಧಾಮಿ೯ಕ, ಆದ್ಮಾತ್ಮಿಕ ಜ್ಞಾನಿಗಳು, ಗಾಯಕರು ಹೀಗೆ ಮಡಿಕೇರಿ ಆಕಾಶವಾಣಿ 27 ವಷ೯ಗಳಿಂದ ಸಾವಿರಾರು ಪ್ರತಿಭೆಗಳಿಗೆ ಅವಕಾಶ ನೀಡಿತ್ತು.
ಇನ್ನು ಮುಂದೆ ಬೆಂಗಳೂರು ಕೇಂದ್ರದಿಂದಲೇ ಕಾಯ೯ಕ್ರಮ ಪ್ರಸಾರವಾದಲ್ಲಿ, ಕೊಡವ, ಅರೆಭಾಷಾ ಕಾಯ೯ಕ್ರಮಗಳಿಗೆ ರಾಜ್ಯವ್ಯಾಪಿಯ ಏಕ ಪ್ರಸಾರದಲ್ಲಿ ಮಾನ್ಯತೆ ಸಿಗುವುದು ಖಂಡಿತಾ ಕಷ್ಟಸಾಧ್ಯ.
ಮಡಿಕೇರಿಯಲ್ಲಿಯೇ ನಿಲಯ ಹೊಂದಿ ಇಲ್ಲಿಯ ಸುಸಜ್ಜಿತ ಸ್ಟುಡಿಯೋದಲ್ಲಿ ಕಾಯ೯ಕ್ರಮ ನೀಡುತ್ತಿದ್ದವರು ದೂರದ ಬೆಂಗಳೂರಿಗೆ ತೆರಳಿ ಕಾಯ೯ಕ್ರಮ ನೀಡುವುದು ಖಂಡಿತಾ ಸುಲಭವಲ್ಲ. .
ಮಡಿಕೇರಿ ಎಫ್ ಎಂ.ನ್ನೇ ಅವಲಂಭಿಸಿಕೊಂಡು ಅನೇಕ ಉದ್ಘೋಷಕರು, ವಾತಾ೯ ವಾಚಕರು, ನಿರೂಪಕರು ಇದ್ದಾರೆ. ಇಂಥವರ ಉದ್ಯೋಗಕ್ಕೂ ಕುತ್ತು ಬರುವ ಸಾಧ್ಯತೆಯಿದೆ. ಕಾಯ೯ಕ್ರಮಗಳನ್ನು ನೀಡಿದರೆ ಕಲಾವಿದರಿಗೆ ದೊರಕುತ್ತಿದ್ದ ಸಂಭಾವನೆಯೂ ದೊರಕದೆ ಇರುವ ಸ್ಥಿತಿ ತಲೆದೋರಲಿದೆ. ಬೆಂಗಳೂರು ಕೇಂದ್ರದ ಪ್ರಸಾರದಲ್ಲಿ ಕೊಡಗಿನ ನಿಧನ ಸುದ್ದಿಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ?
ಎಲ್ಲಕ್ಕಿಂತ ಮುಖ್ಯವಾಗಿ ಕೊಡವ, ಅರೆಭಾಷೆಯಂತ ಪ್ರಮುಖ ಪ್ರಾದೇಶಿಕ ಭಾಷೆಗಳಿಗೆ ಆಕಾಶವಾಣಿ ಮಾಧ್ಯಮದ ಮೂಲಕ ದೊರಕಿದ್ದ ಮನ್ನಣೆಗೇ ಧಕ್ಕೆಯಾಗಲಿದೆ. ಇದರಿಂದಾಗಿ ಪ್ರಾದೇಶಿಕ ಭಾಷಿಕರ ಸಂಸ್ಕೖತಿ, ಸಂಪ್ರದಾಯಗಳ ಪಸರಿಸುವಿಕೆಗೂ ತೊಡಕಾಗಲಿದೆ. ಆಕಾಶವಾಣಿ ಕೇವಲ ಮಾಧ್ಯಮ ಮಾತ್ರವಾಗಿರದೇ ಕೊಡಗಿನ ಜನರ ಪಾಲಿಗೆ ಸಾಂಸ್ಕೖತಿಕ ಮಾಧ್ಯಮವಾಗಿಯೂ ಗುರುತಿಸಲ್ಪಟ್ಟ ಹೆಗ್ಗಳಿಕೆ ಹೊಂದಿದೆ.
ಯಾಕಾಗಿ ಈ ಉದ್ದೇಶ?
ಕಳೆದ 3-4 ವಷ೯ಗಳಿಂದ ದೇಶವ್ಯಾಪಿ ಬಾನುಲಿ ಕೇಂದ್ರಗಳಲ್ಲಿ ಸಾವಿರಾರು ಮಂದಿ ಉದ್ಯೋಗಿಗಳು ನಿವೖತ್ತಿಯಾಗುತ್ತಲೇ ಇದ್ದಾರೆ. ಇವರ ಬದಲಿಗೆ ಹೊಸ ಉದ್ಯೋಗಿಗಳ ನೇಮಕಾತಿ ನಿರೀಕ್ಷಿತ ರೀತಿಯಲ್ಲಿ ಆಗಿಲ್ಲ. ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿಗಳು ಬಹಳಷ್ಟು ರೆಡಿಯೋ ಕೇಂದ್ರಗಳಲ್ಲಿದ್ದಾರೆ. ಇವರನ್ನೇ ಬಳಸಿಕೊಂಡು ಕಾಯ೯ಕ್ರಮಗಳನ್ನು ರೂಪಿಸಲಾಗುತ್ತಿತ್ತು.
ಪ್ರಸಾರ ಭಾರತಿಗೆ ಆದಾಯವೂ ತೀವ್ರ ಇಳಿಮುಖವಾಗಿತ್ತು. ಹೀಗಾಗಿ ವೇತನ ನೀಡಿಕೆಯಲ್ಲಿಯೂ ವಿಳಂಭವಾಗುತ್ತಿತ್ತು. ಮಡಿಕೇರಿಯಂಥ ಕೆಲವೊಂದು ಕೇಂದ್ರ ಹೊರತು ಪಡಿಸಿದರೆ ದೇಶದ ಅನೇಕ ಎಫ್.ಎಂ.ಕೇಂದ್ರಗಳು ಜಾಹೀರಾತು ಆದಾಯ ಮೂಲವಿಲ್ಲದೇ ನಷ್ಟದಲ್ಲಿದ್ದು ನಿವ೯ಹಣೆಗೆ ಬಿಳಿ ಆನೆಗಳಂತಾಗಿದ್ದವು.
ಇಂಥ ನಷ್ಟದ ಬದಲಿಗೆ ವೆಚ್ದ ಮಿತಿಗೆ ಕಡಿವಾಣ ಹಾಕುವ ಉದ್ದೇಶದಿಂದ ಏಕ್ ಭಾರತ್ – ಏಕ್ ರೆಡಿಯೋ ಯೋಜನೆಯನ್ನು ಸದ್ದಿಲ್ಲದೆ ಜಾರಿಗೆ ತರಲು ಪ್ರಸಾರ ಭಾರತಿ ಮುಂದಾಗಿದೆ.
ಬಿಎಸ್.ಎನ್ ಎಲ್ ನಂಥ ದೂರವಾಣಿಯ ಬೖಹತ್ ಜಾಲವನ್ನು ನಷ್ಟ ಎಂದು ಕೇಂದ್ರ ಸಕಾ೯ರ ಯಾವೆಲ್ಲಾ ರೀತಿಯಲ್ಲಿ ನಿಲ೯ಕ್ಷಿಸಿ ಖಾಸಗಿಯವರಿಗೆ ದೂರವಾಣಿ ಜಾಲದಲ್ಲಿ ದಾರಿಮಾಡಿತ್ತೋ ಅದೇ ರೀತಿ ರೆಡಿಯೋ ಮಾಧ್ಯಮವನ್ನೂ ಖಾಸಗಿಯವರಿಗೆ ನೀಡುವ ಹುನ್ನಾರ ಇದರಲ್ಲಿ ಇದ್ದಂತಿದೆ ಎಂದೂ ಕೆಲವರು ಆರೋಪಿಸುತ್ತಿದ್ದಾರೆ.
ಮೂಲಗಳ ಪ್ರಕಾರ ಈಗಾಗಲೇ ಖಾಸಗಿ ಸಂಸ್ಥೆಯೊಂದು ಮಡಿಕೇರಿ ಅಥವಾ ಕುಶಾಲನಗರವನ್ನು ಕೇಂದ್ರವಾಗಿರಿಸಿಕೊಂಡು ಖಾಸಗಿ ಎಫ್.ಎಂ.ನಿಲಯಕ್ಕೆ ಸವೇ೯ ನಡೆಸಿದೆ. ಸಕಾ೯ರಿ ಎಫ್.ಎಂ. ಕೇಂದ್ರದ ಜನಪ್ರಿಯತೆ ಆಧಾರದಲ್ಲಿ ಖಾಸಗಿ ಎಫ್.ಎಂ.ಗೆ ಕೊಡಗಿನಲ್ಲಿ ಶ್ರೋತೖಗಳ ಮಾನ್ಯತೆ ದೊರಕಬಹುದು ಎಂಬ ಅಭಿಪ್ರಾಯವೂ ಸಮೀಕ್ಷೆಯಲ್ಲಿ ಎರಡು ವಷ೯ಗಳ ಹಿಂದೆಯೇ ದೊರಕಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಖಾಸಗಿ ಎಫ್.ಎಂ.ಕೊಡಗಿನ ಮನೆಗಳ ರೆಡಿಯೋಗಳಲ್ಲಿ ಕೇಳಿಬರುವ ಸಾಧ್ಯತೆಯೂ ಹೆಚ್ಚಿದೆ. ಆದರೆ ಖಾಸಗಿ ಎಫ್.ಎಂ.ಗಳಲ್ಲಿ ಇಂದಿನ ಯುವಪೀಳಿಗೆಯನ್ನೇ ದೖಷ್ಟಿಯಲ್ಲಿರಿಸಿಕೊಂಡು ಚಲನಚಿತ್ರ ಗೀತೆಗಳಿಗೆ ಆದ್ಯತೆ ನೀಡಲಾಗುತ್ತದೆಯೇ ವಿನಾ ಕೖಷಿ, ಸಂಸ್ಕೖತಿ, ನಾಡು, ನುಡಿಗೆ ಮಾನ್ಯತೆ ದೊರಕುತ್ತದೆ ಎಂಬ ನಿರೀಕ್ಷೆ ತಪ್ಪಾದೀತು.
ಮಡಿಕೇರಿ ಎಫ್ ಎಂ. ಕೇಂದ್ರವು ಬೆಂಗಳೂರಿನೊಂದಿಗೆ ಮರುಬ್ರ್ಯಾಂಡಿಂಗ್ ಆಗುವುದನ್ನು ತಪ್ಪಿಸಬಹುದೇ?
ಸದ್ಯದ ಪರಿಸ್ಥಿತಿಯಲ್ಲಿ ಇದು ಕಷ್ಟ. ಯಾಕೆಂದರೆ, ಇಂಥ ನಿಧಾ೯ರ ದೇಶವ್ಯಾಪಿ ಜಾರಿಗೆ ತರಲಾಗುತ್ತಿದೆ. ಹೀಗಾಗಿ ಕೊಡಗಿಗೆ ಸಂಬಂಧಿಸಿದ ಜನಪ್ರತಿನಿಧಿಗಳ ಮಾತು, ಕೊಡಗಿನ ಜನರ ಕೂಗನ್ನು ಕೇಂದ್ರ ಸಕಾ೯ರ ಕೇಳಿಸಿಕೊಳ್ಳುತ್ತದೆ ಎಂಬುದು ಭ್ರಮೆಯಾದೀತು.
ಇದೇ 18 ರಂದು ಶುಕ್ರವಾರ ಮರುಬ್ರ್ಯಾಂಡಿಂಗ್ ಸಂಬಂಧಿತ ಬೆಂಗಳೂರಿನಲ್ಲಿ ಉದ್ಯೋಗಿಗಳ ಸಭೆ ಆಯೋಜಿತವಾಗಿದೆ. ಅಲ್ಲಿ ಯಾವ ತೀಮಾ೯ನ ಕೈಗೊಳ್ಳಲಾಗುತ್ತದೆಯೋ ಕಾದು ನೋಡಬೇಕು.
ಮೂಲಗಳ ಪ್ರಕಾರ ಜನವರಿ ಮೊದಲ ವಾರದಲ್ಲಿ ಕೇಂದ್ರ ಸಕಾ೯ರ ಮರುಬ್ರ್ಯಾಂಡಿಂಗ್ ಬಗ್ಗೆ ಅಧಿಕೖತ ಪ್ರಕಟಣೆ ಹೊರಡಿಸಲಿದೆ.
ಇದು ಅನಿವಾರ್ಯ
..
ಆಕಾಶವಾಣಿ ವಿಭಿನ್ನ ಮಾಧ್ಯಮವಾಗಿ ಗುರುತಿಸಿಕೊಳ್ಳಬೇಕಾಗಿರುವುದು ಇಂದಿನ ಸ್ಪಧಾ೯ತ್ಮಕ ದಿನಗಳಲ್ಲಿ ಅನಿವಾಯ೯. ವಾಣಿಜ್ಯ ದೖಷ್ಟಿಕೋನ ಕೂಡ ಗಮನಿಸಲೇಬೇಕಾದ ಅಂಶವಾಗಿದೆ. ಹೆಚ್ಚಿನ ಕಾಯ೯ಕ್ರಮಗಳಿಗಿಂತ ಗುಣಮಟ್ಟದ ಕಾಯ೯ಕ್ರಮಕ್ಕೆ ನಾವು ಗಮನ ಹರಿಸಲಿದ್ದೇವೆ. ವಿವಿಧ ಆಕಾಶವಾಣಿ ಕೇಂದ್ರಗಳಿಂದ ಒಂದೇ ರೀತಿಯ ಕಾಯ೯ಕ್ರಮಗಳನ್ನು ಶ್ರಮವಹಿಸಿ ರೂಪಿಸುವ ಬದಲಿಗೆ, ಒಂದೇ ಕಡೆ ಕೇಂದ್ರೀಕರಿಸಿ ಕಾಯ೯ಕ್ರಮ ರೂಪಿಸಿದರೆ ಆಥಿ೯ಕ ಲಾಭ ಸಾಧ್ಯ. ಡಿಜಿಟಲ್ ಮಾಧ್ಯಮ ಯುಗಕ್ಕೆ ತಕ್ಕಂತೆ ಆಕಾಶವಾಣಿ ಕೂಡ ಬದಲಾಗಲೇಬೇಕಾದ ಅಗತ್ಯ ಇಂದಿನ ದಿನಗಳಲ್ಲಿದೆ. ಇದರಿಂದಾಗಿ ಪ್ರಾದೇಶಿಕ ಭಾಷಾ ಕಾಯ೯ಕ್ರಮಗಳಿಗೆ ಸಮಸ್ಯೆಯಾಗುತ್ತದೆ ಎಂಬುದು ಪೂತಿ೯ ನಿಜವಲ್ಲ. ಯಾಕೆಂದರೆ, ಪ್ರಾದೇಶಿಕ ಭಾಷೆಯ ಕಾಯ೯ಕ್ರಮಗಳು ಬೆಂಗಳೂರಿನಿಂದ ಪ್ರಸಾರವಾದರೇ ಆ ಪ್ರಾದೇಶಿಕ ಭಾಷೆಯು ರಾಜ್ಯವ್ಯಾಪಿ ಇರುವ ಜನರನ್ನು ತಲುಪುವುದು ಸುಲಭಸಾಧ್ಯವಾಗಲಿದೆ. ಗುಣಮಟ್ಟದ ಕಾಯ೯ಕ್ರಮಗಳು ಬೆಂಗಳೂರಿನಿಂದಲೇ ಪ್ರಸಾರವಾಗುವಂತೆ ಗಮನ ಹರಿಸಲಾಗುತ್ತದೆ ಎನ್ನುತ್ತಾರೆ ಪ್ರಸಾರ ಭಾರತಿಯ ಉಪಮಹಾನಿದೇ೯ಶಕ ಪ್ರಕಾಶ್ ವೀರ್.